ಸೀಜ್ಹರ್ ಶೇಖಡ 70 ಚಿತ್ರೀಕರಣ ಪೂರ್ಣ
Posted date: 06 Tue, Sep 2016 – 08:16:39 AM

ದೃತಿ ಕ್ರಿಯೇಷನ್ ಹಾಗೂ ಶ್ರೀ ಕದರಿ ಲಕ್ಷ್ಮಿನರಸಿಂಹ ಸ್ವಾಮಿ ಬ್ಯಾನರ್ ಅಡಿಯಲ್ಲಿ ತ್ರಿವಿಕ್ರಮ ಸಾಫಲ್ಯ ಹಾಗೂ ವಿನಯ್ ಕೃಷ್ಣ ನಿರ್ಮಾಣದ ಸೀಜ್ಹರ್ (ಮುಟ್ಟುಗೋಲು) ಕನ್ನಡ ಚಿತ್ರ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ, ನಾಗರಾಭವಿ ರಸ್ತೆ, ಬಸವನಗುಡಿ, ಕುಮಾರಸ್ವಾಮಿ ಲೇ ಔಟ್ ಸುತ್ತ ಮುತ್ತ ಶೇಖಡ 70 ರಷ್ಟು ಚಿತ್ರೀಕರಣ ಪೂರೈಸಿಕೊಂಡಿದೆ.

ವಿನಯ್ ಕೃಷ್ಣ ನಿರ್ಮಾಪಕರಲ್ಲಿ ಒಬ್ಬರಾಗಿ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಸಹ ಮಾಡುತ್ತಾ ಇದ್ದಾರೆ. ವಿ ರವಿಚಂದ್ರನ್ ಮುಖ್ಯ ಪಾತ್ರದಲ್ಲಿ ಸಾವಿರಾರು ಕಾರುಗಳಿಗೆ ಹಣ ಒದಗಿಸುವುವ ಮಾಲೀಕ - ಫೈನಾನ್ಸಿಯರ್. ರೌಡಿಗಳಿಗೆ ರಾಜ (ಗಾಡ್ ಆಫ್ ಗೂಂಡಾಸ್) ಆಗಿ ಪ್ರಕಾಷ್ ರಾಜ್ ಅವರು ಇದ್ದಾರೆ. ಸಾಲದ ಮೇಲೆ ಕೊಟ್ಟ ಕಾರುಗಳ ಧಂದೆ ನಡೆಸುವ ಖಳನ ಪಾತ್ರದಲ್ಲಿ ಪ್ರಕಾಷ್ ರಾಜ್ ಪಾತ್ರದ ಚಿತ್ರೀಕರಣ ಸಂಪೂರ್ಣ ಸಹ ಆಗಿದೆ. ಸಾಲ ಕೊಟ್ಟ ಮೇಲೆ ಅದನ್ನು ಮರುಪಾವತಿ ಆಗುವುದನ್ನು ನೋಡಿಕೊಳ್ಳುವ ಪಾತ್ರದಲ್ಲಿ ಚಿರಂಜೀವಿ ಸರ್ಜಾ ಅಭಿನಯಿಸುತ್ತಾ ಇದ್ದಾರೆ. ಬನ್ನೇರುಘಟ್ಟ ರಸ್ತೆಯಲ್ಲಿ ಮುಟ್ಟುಗೋಲಾದ 2500 ವಿವಿಧ ವಾಹನಗಳ ಸ್ಥಳದಲ್ಲಿ ಬಹುತೇಕ ಚಿತ್ರೀಕರಣ ಮಾಡಲಾಗಿದೆ.

ಪರುಲ್ ಯಾದವ್ ನಾಯಕಿ. ನಾಗಿನೆನಿ ವೆಳ್ಳಂಕಿ, ರವಿ ಪ್ರಕಾಷ್, ಡ್ಯಾನಿ ಕೊಟ್ಟಪ್ಪ, ರಮೇಶ್ ಭಟ್, ಶೋಬಾರಾಜ್, ಸುಚಿಂದ್ರ ಪ್ರಸಾದ್, ಹನುಮಂತೆ ಗೌಡ, ಕೀರ್ತಿರಾಜ್, ಸತ್ಯಜಿತ್, ಲಕ್ಷ್ಮಣ್ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

ಚಿತ್ರದ ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡುತ್ತಾ ಇರುವವರು ಚಂದನ್ ಶೆಟ್ಟಿ. ಅವರದೇ ಸಾಹಿತ್ಯ ಸಹ ಬಳಸಲಾಗಿದೆ. ಅಂಜಿ ಅವರ ಛಾಯಾಗ್ರಹಣ, ಗಣೇಶ್ ಆವರ ಸಾಹಸ ಒದಗಿಸಿದ್ದಾರೆ.

ಅಕ್ಟೋಬರ್ ತಿಂಗಳಿನಲ್ಲಿ ನಾಲ್ಕು ಹಾಡುಗಳ ಚಿತ್ರೀಕರಣ ಮಾಡಿ ನವೆಂಬರ್ ಮಾಸದಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಜನೆ ರೂಪಿಸಿಕೊಂಡಿದ್ದಾರೆ ನಿರ್ದೇಶಕ ವಿನಯ್ ಕೃಷ್ಣ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed